ಹಿರಿಯ ಕಾಂಗ್ರೆಸ್ ಮುಖಂಡ ರಾಜು ದೇವಾಡಿಗ ನಿಧನ

ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರದ ಪ್ರಭಾವಿ ರಾಜಕಾರಣಿಯಾದ ರಾಜು ದೇವಾಡಿಗರು ಇತ್ತೀಚಿನ ದಿನದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಮರಣ ಹೊಂದಿರುತ್ತಾರೆ.
ಮೃತರು ಕಾಂಗ್ರೆಸ್ ಪಕ್ಷದಿಂದ ತಾಲೋಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಿ ಕುಂದಾಪುರ ತಾಲೋಕು ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪಂಚಗಂಗಾವಳಿ ಸಹಕಾರಿ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿಯೂ ಅನೇಕ ವರ್ಷಗಳ ಕಾಲ ಸಹಕಾರಿ ಧುರೀಣರಾಗಿದ್ದರು. ಹಲವು ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸಿ ಗುರುಸ್ವಾಮಿಯಾಗಿ ಅನೇಕ ಅಯ್ಯಪ್ಪ ಮಾಲಾಧಾರಿಗಳನ್ನು ಶಬರಿಮಲೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು.
ರಾಜು ದೇವಾಡಿಗರ ಅಗಲಿಕೆಗೆ ಬೈಂದೂರು ಮಾಜೀ ಶಾಸಕ ಗೋಪಾಲ ಪೂಜಾರಿ ಶೋಕ ವ್ಯಕ್ತ ಪಡಿಸಿದ್ದಾರೆ.





