ಸಾಲಿಗ್ರಾಮ: ಕಾರು – ಬೈಕ್ ಮುಖಾಮುಖಿ ಡಿಕ್ಕಿ ಸಾಲಿಗ್ರಾಮದ ಕೃಷಿಕ ಪರಮೇಶ್ವರ್ ಭಟ್ ಗಂಭಿರ

ಸಾಲಿಗ್ರಾಮ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಎದುರು ಭಾನುವಾರ ಸಂಜೆ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬಸ್ರೂರು ಮೂಲದ ಅಕ್ಷಯ್ ಭಂಡಾರಿಯವರ ಕಾರು ಮಂಗಳೂರಿಗೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ವಾಪಾಸ್ ಬರುವಾಗ ಬೈಕ್ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ.
ಬೈಕ್ ಸವಾರರಾದ ಪರಮೇಶ್ವರ್ ಭಟ್ ಇವರು ಮನೆಯಿಂದ ಸರ್ವಿಸ್ ರಸ್ತೆ ಮೂಲಕ ಸಾಲಿಗ್ರಾಮ ಪೇಟೆಗೆ ತೆರಳುವಾಗ ಕಾರು ಗುದ್ದಿದ ಪರಿಣಾಮ ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ಕಾಲಿಗೆ ಬಲವಾದ ಪೆಟ್ಟು ಬಿದ್ದಿದೆ.
ಅವೈಜ್ಞಾನಿಕವಾದ ಈ ಸರ್ಕಲ್ ಡೇಂಜರ್ ವಿಭಾಗವಾಗಿ ಗುರುತಿಸಲಾಗಿದ್ದು, ಈ ಹಿಂದೆಯೂ ಅನೇಕ ಸಾವು ನೋವು ಸಂಭವಿಸಿದೆ. ಆದರೆ ಇದುವರೆಗೂ ಹೆದ್ದಾರಿ ಪ್ರಾಧಿಕಾರವಾಗಲಿ ಅಥವಾ ನವಯುಗ ಕಂಪನಿ ಯಾವುದೇ ಪರಿಹಾರ ಕ್ರಮ ಕೈ ಗೊಂಡಿಲ್ಲ. ಅಪಘಾತ ನಡೆದಾಗ ವಾಹನ ತೆರವು ಗೊಳಿಸುವ ಟೋಯಿಂಗ್ ವಾಹನ ಕೂಡ ನವಯುಗ ಕಂಪನಿ ಒದಗಿಸುತ್ತಿಲ್ಲ.
ಇಂತಹ ಸಂದರ್ಭದಲ್ಲಿ ಸ್ಥಳೀಯರೇ ವಾಹನ ದೂಡಿಕೊಂಡು ಬದಿಗೆ ಸರಿಸಬೇಕಾಗಿದೆ. ಇಂದು ಕೂಡ ಸ್ಥಳೀಯರು ಗಾಯಳುವನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ವಾಹನಗಳನ್ನು ಬದಿಗಿರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.





