“ಹಣಕ್ಕಿಂತ ಮನಸ್ಸು ದೊಡ್ಡದು”: ಸಾಲಿಗ್ರಾಮದಲ್ಲಿ ಯಕ್ಷಗಾನದ ಮೂಲಕ ಮಾನವೀಯ ಸೇವೆ – ಆಶಕ್ತರಿಗೆ ಮನೆ, ರೋಗಿಗಳಿಗೆ ಧನಸಹಾಯ

“ಹಣಕ್ಕಿಂತ ಮನಸ್ಸು ದೊಡ್ಡದು”: ಸಾಲಿಗ್ರಾಮದಲ್ಲಿ ಯಕ್ಷಗಾನದ ಮೂಲಕ ಮಾನವೀಯ ಸೇವೆ – ಆಶಕ್ತರಿಗೆ ಮನೆ, ರೋಗಿಗಳಿಗೆ ಧನಸಹಾಯ


ಸಾಲಿಗ್ರಾಮ: ದಾನ ಅಥವಾ ಸಹಾಯ ಮಾಡಲು ಹಣಕ್ಕಿಂತ ಮನಸ್ಸು ದೊಡ್ಡದು ಎನ್ನುವುದನ್ನು ಸತೀಶ್ ಕಾರ್ಕಡ ಮತ್ತು ಇವರ ತಂಡ ರುಜುವಾತು ಪಡಿಸಿ ತೋರಿಸಿದ್ದಾರೆ.

ಸಾಲಿಗ್ರಾಮದ ಕಾರ್ಕಡ ಭಟ್ಟರಕಟ್ಟೆಯ ಜ್ಯೋತಿ ವಿಕ್ಟೊರಿಯಾ ಲೂಹಿಸ್ ದಂಪತಿಗಳು ಶಿಥಿಲಗೊಂಡ ಮನೆಯಲ್ಲಿ ವಾಸಿಸುತ್ತಿದ್ದುದನ್ನು ಮತ್ತು ಸ್ಥಳೀಯ ವ್ಯಕ್ತಿ ದಿನೇಶ್ ಕಾರ್ಕಡ ಇವರು ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಂಡು ಮರಗಿದ ಸತೀಶ್ ಮತ್ತು ಅವರ ತಂಡದ ಶ್ರೀನಿವಾಸ ಕಾರ್ಕಡ, ಸಂತೋಷ ಕಾರ್ಕಡ, ಶಿಶಿರ ಕಾರ್ಕಡ, ರಮೇಶ್ ಕಾರ್ಕಡ ಇವರುಗಳು ನೀಲಾವರ ಮೇಳದ ಯಕ್ಷಗಾನ ಆಯೋಜನೆ ಮಾಡಿ ಹಣ ಸಂಗ್ರಹಣೆ ಮಾಡಿದರು.

ಆರ್ಥಿಕವಾಗಿ ಈ ತಂಡದ ಸದಸ್ಯರು ಬಲಾಢ್ಯರಲ್ಲ. ಆದರೂ ಕೂಡ ಕಷ್ಟ ಎಂದಾಗ ಮಿಡಿಯುವ ಹೃದಯ ಶ್ರೀಮಂತಿಕೆ ಇವರಲ್ಲಿದೆ. ಒಂದಷ್ಟು ದಿನ ತಮ್ಮ ದಿನದ ವೃತ್ತಿಗೆ ರಜೆ ಪಡೆದು, ಯಕ್ಷಗಾನ ಹೆಸರಲ್ಲಿ ಹಣ ಸಂಗ್ರಸಿ ಉಳಿದ 50 ಸಾವಿರ ರೂಪಾಯಿಯಲ್ಲಿ ತಲಾ 2 ಕುಟುಂಬಕ್ಕೆ 25 ಸಾವಿರ ರೂಪಾಯಿಯಂತೆ ನೀಡಿದ್ದಾರೆ. ಇಂತಹ ಮಾನವೀಯ ಸೇವೆ ಮಾಡುವ ಮನಸ್ಸುಗಳು ಒಂದಾದರೆ ,ಸಮಾಜದಲ್ಲಿ ಸಹಜೀವನ ಪದ್ಧತಿಗೆ ಬೆಲೆ ಹೆಚ್ಚಾಗಲಿದೆ.
ಇವರೊಂದಿಗೆ ಯಕ್ಷ ಬ್ರಹ್ಮಶ್ರೀ ತಂಡದವರು ಕೂಡ ಕೈ ಜೋಡಿಸಿ ಸಹಕಾರ ನೀಡಿದ್ದಾರೆ.

ಯುವಕರ ಈ ಪ್ರಯತ್ನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Join WhatsApp

Join Now

Join Telegram

Join Now

Read more

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

ಎಕ್ಸಲೆಂಟ್ ಕಾಲೇಜು, ಸುಣ್ಣಾರಿ, ಕುಂದಾಪುರ: “ರಾಜ್ಯದಲ್ಲಿ ಅತ್ಯುತ್ತಮ ಸಾಧನೆ”

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಡೋಣ ಬಾ ಬೇಸಿಗೆ ಶಿಬಿರಕ್ಕೆ ಚಾಲನೆ.ಕ್ರೀಡಾಸಾಧಕರಿಗೆ ಸರಕಾರಿ ಉದ್ಯೋಗ ಅವಕಾಶ – ಕ್ರೀಡಾಪಟು ಪೊಲೀಸ್ ಅಧಿಕಾರಿ ನವೀನ್ ಕಾಂಚನ್

ಬ್ರಹ್ಮಾವರ : ಸುಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿವೇತನ ಪರೀಕ್ಷೆ ಉದ್ಘಾಟನೆ : ಅಂಕಗಳಿಕೆ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಿ. ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

Leave a Comment