ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕರಾದ SP ವೆಂಕಟೇಶ್ ನಿಧನ

ತಮಿಳುನಾಡು ಮೂಲದ SP ವೆಂಕಟೇಶ್ ತಮಿಳು ಸೇರಿದಂತೆ ಕನ್ನಡ ತೆಲುಗು ಮತ್ತು ಮಾಲಯಾಳಂ ಚಿತ್ರಗಳಿಗೆ ಸಂಗೀತ ನೀಡಿ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿ ಗುರುತಿಸಿ ಕೊಂಡಿದ್ದರು.
ಕನ್ನಡದಲ್ಲಿ ಹಲವಾರು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು,ಅದರಲ್ಲಿ ಕುಮಾರ್ ಬಂಗಾರಪ್ಪ ನಿರ್ದೇಶನದ ಅಶ್ವಮೇಧಾ ಚಿತ್ರಕ್ಕೆ ಸಂಗೀತ ನೀಡಿದ್ದರು.
ಅಶ್ವಮೇಧಾ ಚಿತ್ರದಲ್ಲಿನ ಹೃದಯ ಸಮುದ್ರ ಕಲುಕಿ ಹಾಡು ಅಂದಿನಿಂದ ಇಂದು ಕೂಡ ಜನಪ್ರಿಯ ಹಾಡಗಿತ್ತು. 72 ವರ್ಷದ SP ವೆಂಕಟೇಶ್ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದು, ಚೆನೈನ ಸ್ವಗ್ರಹದಲ್ಲಿ ಕೊನೆಯುಸಿರೆಳೆದರು.ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಹಾಗೂ ರಾಜಕಾರಣಿಯಾದ ಕುಮಾರ್ ಬಂಗಾರಪ್ಪ ಸೇರಿ ಅನೇಕ ನಟರು ಶೋಕ ವ್ಯಕ್ತ ಪಡಿಸಿದರು.
