ಮಂದಾರ್ತಿ: ಕಾಡಿ ಬೇಡುವುದು ಚಿಲ್ಲರೆ ಹಣ. ದಾನವಾಗಿ ನೀಡುವುದು ಲಕ್ಷ ಲಕ್ಷ. ಇದು ಅಶ್ವಥಮ್ಮನ ಉದಾರತೆ

ಮಂದಾರ್ತಿ: ಕಾಡಿ ಬೇಡುವುದು ಚಿಲ್ಲರೆ ಹಣ. ದಾನವಾಗಿ ನೀಡುವುದು ಲಕ್ಷ ಲಕ್ಷ. ಇದು ಅಶ್ವಥಮ್ಮನ ಉದಾರತೆ


ಮಂದಾರ್ತಿ : ಭಿಕ್ಷೆ ಬೇಡಿದ ಹಣದಲ್ಲಿ ಶ್ರೀ ಮಂದಾರ್ತಿ ಕ್ಷೇತ್ರದಲ್ಲಿ,ಅನ್ನದಾನ ಮತ್ತು ವಸ್ತ್ರದಾನ ಮಾಡಲು ಮಹಿಳೆಯೋರ್ವರು ಸಂಕಲ್ಪ ಮಾಡಿದ್ದಾರೆ.
ಇವರ ಹೆಸರು ಅಶ್ವಥಮ್ಮ. ವಯಸ್ಸು ಸಾರಾಸರಿ 70.ಗಂಗೊಳ್ಳಿಯ ಕಂಚುಗೋಡು ಇವರ ಊರು. ಆದರೆ ಮೂಲತಃ ಕಂಚುಗೋಡಿನವರು ಅಲ್ಲ. ಆಂಧ್ರ ಮೂಲದಿಂದ ವಲಸೆ ಬಂದ ರಂಗಭೂಮಿ ಕಲಾವಿದರ ಗುಂಪಿನವರು. ಕಾರಣಾಂತರಗಳಿಂದ ಕಂಚುಗೊಂಡಿನಲ್ಲಿ ಉಳಿದು ಬಿಡುತ್ತಾರೆ. ಮಕ್ಕಳು ಇಲ್ಲದಿದ್ದರೂ ಮೂವರು ಹೆಣ್ಣು ಮಕ್ಕಳನ್ನು ದತ್ತು ಪಡೆದು ಓದಿಸಿ ಮದುವೆ ಮಾಡಿ ಸಂಸಾರದ ನೌಕೆಯಲ್ಲಿ ತೇಲಿ ಬಿಟ್ಟಿದ್ದಾರೆ.

ಹಲವಾರು ವರ್ಷದಿಂದ ಕೆಲವು ದೇವಸ್ಥಾನದ ಮುಂದೆ ಅಮ್ಮ ತಾಯಿ ಅಂತ ಭಕ್ತರ ಮೂಲಕ ಚಿಲ್ಲರೆ ಹಣ ಸಂಗ್ರಹಣೆ ಮಾಡುತ್ತಾರೆ.ರಾತ್ರಿ ಸಮಯ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಒಂದು ನಿರ್ದಿಷ್ಟ ಜಾಗದಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವರ್ಷಕ್ಕೊಮ್ಮೆ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ದಿನಕ್ಕೊಂದು ದೇವಸ್ಥಾನದ ಮುಂದೆ ಕುಳಿತು ಹಣ ಸಂಗ್ರಹಣೆ ಆದಮೇಲೆ ತನ್ನ ಊರಿಗೆ ತೆರಳಿ ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆಗೆ ಕಾಲ ಕಳೆದು ಬರುತ್ತಾರೆ.

ತಾನು ಸಂಗ್ರಹಣೆ ಮಾಡಿದ ಹಣವನ್ನು ದೇವಾಲಯಗಳಲ್ಲಿ ನಡೆಯುವ ಅನ್ನದಾನಕ್ಕೆ ದೇಣಿಗೆ ನೀಡುವುದೇ ಇವರಿಗೆ ಇರುವ ಆಸಕ್ತಿ.
ಈ ಆಶಯಂದಂತೆ ಇದೇ ಬರುವ ಏಪ್ರಿಲ್ 29ರ ಬುದುವಾರ ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅನ್ನದಾನ ಮತ್ತು ವಸ್ತ್ರದಾನ ಮಾಡಲು ಸಂಕಲ್ಪ ಮಾಡಿರುತ್ತಾರೆ.
ಇವರು ಈ ಮೊದಲು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಒಂದೂವರೆ ಲಕ್ಷ, ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಒಂದು ಲಕ್ಷ. ಶಬರಿಮಲೆ ಪಂಪಾ ಕ್ಷೇತ್ರದಲ್ಲಿ ಅನ್ನದಾನ, ಕಂಚುಗೋಡು ದೇವಸ್ಥಾನಕ್ಕೂ ಒಂದು ಲಕ್ಷ ನೀಡಿರುತ್ತಾರೆ.

Join WhatsApp

Join Now

Join Telegram

Join Now

Read more

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿಗೆ ₹5 ಲಕ್ಷ ಅನುದಾನ ಮಂಜೂರು; ಅಜಿತ್ ಕುಮಾರ್ ಶೆಟ್ಟಿ ಮನವಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಂದನೆ

ಉಡುಪಿ: ಬೈಂದೂರು ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಮರಳಿ ಆರೋಗ್ಯ ಇಲಾಖೆಗೆ. ತತ್ ಕ್ಷಣ ಜಾರಿಗೆ ಆದೇಶ.

ಸುಜ್ಞಾನದಂಗಳದಲ್ಲಿ ಮಂಥನ-2026 ಬೇಸಿಗೆ ಶಿಬಿರ ಶುಭಾರಂಭ: ಮಕ್ಕಳಲ್ಲಿರುವ ಪ್ರತಿಭೆಗನುಗುಣವಾಗಿ ಪೋಷಕರ ಪ್ರೋತ್ಸಾಹ ಅಗತ್ಯ – ಜಯಪ್ರಕಾಶ್ ಹೆಗ್ಡೆ

ಸಿದ್ದಾಪುರ: ಜ್ಞಾನ ಸರಸ್ವತಿ ಶಿಕ್ಷಣ ಸಂಸ್ಥೆಗೆ SSLC ಯಲ್ಲಿ 100 ಫಲಿತಾಂಶ. ಸಾಧನೆಗೈದ ವಿದ್ಯಾರ್ಥಿನಿಗೆ 25 ಸಾವಿರ ಪ್ರೋತ್ಸಾಹ ಧನ

ಬ್ರಹ್ಮಾವರ: ಭಕ್ತಿ ಭಾವದ ಸಿರಿ ಸಿಂಗಾರ ಕೋಲಾ ಸೇವೆ : ಸುಗ್ಗಿ ಸುಧಾಕರ್ ಶೆಟ್ಟಿ ನಿವಾಸದಲ್ಲಿ ಕೇಮಾರು ಈಶ ವಿಠಲ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿ

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ಚಾಲನೆ: ​ಸೃಜನಾತ್ಮಕ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಚೆಸ್ ಕ್ರೀಡಾಪಟು ಆರಾಧ್ಯ ಶೆಟ್ಟಿ

Leave a Comment