ಶೀರೂರು ಮಠದ ಸ್ತಬ್ದ ಚಿತ್ರ ವಿಚಾರವಾಗಿ ಗೊಂದಲ

On: January 19, 2026 9:27 AM
Follow Us:

ಶೀರೂರು ಮಠದ ಸ್ತಬ್ದ ಚಿತ್ರ ವಿಚಾರವಾಗಿ ಗೊಂದಲ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ನಡೆದ ಪರ್ಯಾಯ ಪೀಠದ ಮೆರವಣಿಗೆಯಲ್ಲಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯ ಸ್ತಬ್ದ ಚಿತ್ರ ವಿಚಾರವಾಗಿ ಭಾರೀ ಚರ್ಚೆ ನಡೆಯಿತು. 2026-28 ನೇ ಸಾಲಿನ ಶೀರೂರು ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಶಿರೂರು ಸ್ವಾಮಿ (ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ)ಯ ಸ್ತಬ್ದ ಚಿತ್ರ ಮೊದಲಿಗೆ ಹಾಗೂ ಉಳಿದ ಅಷ್ಟ ಮಠ ಗಳ ಸ್ತಬ್ದ ಚಿತ್ರ ನಂತರದ ಸರದಿಯಲ್ಲಿ ಬರಬೇಕು ಎಂಬ ವಿಚಾರದಲ್ಲಿ ಭಾರೀ ಚರ್ಚೆ ನಡೆದು ಗೊಂದಲಕ್ಕೆ ಕಾರಣವಾಯಿತು.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ 2018 ರಲ್ಲಿ ನಿಧನರಾದರು. ಅವರ ಸ್ತಬ್ದ ಚಿತ್ರ ಮೊದಲಿಗೆ ಹೋದರೆ ನಾವೆಲ್ಲರೂ ಬರುವುದಿಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಯಥಾ ಪ್ರಕಾರ ಸರದಿ ಸಾಲಿನಲ್ಲಿ ಸ್ತಬ್ದ ಚಿತ್ರ ದ ಮೆರವಣಿಗೆ ನಡೆದು ಕೊನೆಯದಾಗಿ ಶಿರೂರು ಮಠದ ಲಕ್ಷ್ಮೀ ವರ ತೀರ್ಥ ಸ್ವಾಮಿಯ ಟ್ಯಾಬ್ಲೋ ನಡೆದು ಬಂದಿತು.

ವಾಟ್ಸಾಪ್ ಫೋರ್ವರ್ಡ್ ಸುದ್ದಿ ವಿರುದ್ಧ ದೂರು:
9448117050 ಎಂಬ ವಾಟ್ಸಾಪ್ ಸಂಖ್ಯೆಯ ವ್ಯಕ್ತಿಯೊಬ್ಬರು ಸುಳ್ಳು ಸುದ್ದಿಯನ್ನು ಫೋರ್ವರ್ಡ್ ಮಾಡಿದ್ದಾರೆ. ಈ ಸುದ್ದಿಯಲ್ಲಿ, ಲಕ್ಷ್ಮಿವರದ ಪುತ್ತಳಿ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸದಿರಲು ಉಳಿದ ಎಲ್ಲಾ ಮಠಾಧೀಶರು ನಿರ್ಧರಿಸಿದ್ದಾರೆ ಎಂದು ನಮೂದಿಸಲಾಗಿದೆ.
ಈ ಸುದ್ದಿಯು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂಥದ್ದಾಗಿದೆ. ನಾವು ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ, ಇದನ್ನು ಫೋರ್ವರ್ಡ್ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಮೂಲ ಕಳುಹಿಸಿದ ವ್ಯಕ್ತಿಯ ವಿರುದ್ಧ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಯ ಅಭಿಮಾನಿಗಳು ದೂರು ದಾಖಲಿಸಲು ಮುಂದಾಗಿದ್ದಾರೆ.

Join WhatsApp

Join Now

Join Telegram

Join Now

Read more

ಅಮಾಸೆಬೈಲಿನಲ್ಲಿ 14 ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ: ಸಮಾಜ ಸೇವೆಯಲ್ಲಿ ಎಚ್. ಎಸ್. ಆರ್. ಶೆಟ್ಟಿಯವರ ಮಹತ್ವಾಕಾಂಕ್ಷಿ ಹೆಜ್ಜೆ – ಪೇಜಾವರ ಶ್ರೀ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ 205 ಶಾಲೆಗಳಿಗೆ ಬೆಂಚ್-ಡೆಸ್ಕ್ ವಿತರಣೆ: ಹೊನ್ನವಳ್ಳಿಯಲ್ಲಿ ಸಚಿವ ವಿ.ಸೋಮಣ್ಣರಿಂದ ಹಸ್ತಾಂತರ

ಸಾಲಿಗ್ರಾಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರರ ಮಹಾಪೂಜೆ : ಕುಟುಂಬ ಸಮೇತ ಶ್ರೀ ಗುರುನರಸಿಂಹ ಸ್ವಾಮಿಗೆ ವಿಶೇಷ ಸೇವೆ

ಪ್ರಕೃತಿ ಮಡಿಲಿನಲ್ಲಿ ನಾಯಕತ್ವದ ಪಾಠ: ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಸ್ಕೌಟ್ಸ್ ದಿನಾಚರಣೆ: ಸೌಹಾರ್ದಿತ ವಾತಾವರಣ ನಿರ್ಮಾಣವೇ ಸ್ಕೌಟ್ಸ್ & ಗೈಡ್ಸ್ ಮೂಲ ಉದ್ದೇಶ. ಇಂದ್ರಾಳಿ ಜಯಕರ್ ಶೆಟ್ಟಿ

ವಿದ್ಯಾರಣ್ಯ ಶಿಶು ವಿಹಾರದಲ್ಲಿ ಪದವಿ ಪ್ರದಾನ: ಆತ್ಮವಿಶ್ವಾಸ ಹೆಚ್ಚಿಸುವ ಶಿಕ್ಷಣ ಅಗತ್ಯ. ಕಾಂತರ ಕಮಲ ಖ್ಯಾತಿಯ ಮಾನಸಿ ಸುಧೀರ್.

ಪುನರ್ಜನ್ಮ ಪಡೆದ ‘ಯಕ್ಷ ಚಂದ್ರಿಕೆ’: ಮಂದಾರ್ತಿ ರಥೋತ್ಸವದಲ್ಲಿ ಮತ್ತೆ ಗೆಜ್ಜೆ ಕಟ್ಟಿದ ಶಶಿಕಾಂತ್ ಶೆಟ್ಟಿ!

Leave a Comment