ಅಂದು ಮಲ್ಪೆಯ ವೈರಲ್ ವಾಸು, ಇಂದು ಎದ್ದೇಳಲು ಒಲ್ಲೆ ಎನ್ನುವ ಸ್ಥಿತಿಯಲ್ಲಿ ವಾಸುದೇವ ಮಲ್ಪೆ..!

ಸಾಲಿಗ್ರಾಮ| ಮಲ್ಪೆಯ ನಿವಾಸಿ ವಾಸು ಅಲಿಯಾಸ್ ವೈರಲ್ ವಾಸು ದಶಕದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆದಂತಹ ವ್ಯಕ್ತಿ.

ಮಲ್ಪೆ ಬಂದರಿನಲ್ಲಿ ಕೂಲಿ ಕೆಲಸ ಮಾಡಿ ಕೊಂಡಿದ್ದ ವ್ಯಕ್ತಿ, ಅಮಲು ಪದಾರ್ಥ ಸೇವಿಸಿದ ತಕ್ಷಣ ಸಿನಿಮಾ ನಾಯಕರ ರೀತಿಯಲ್ಲಿ ಡೈಲಾಗ್ ಹೊಡೆಯುತ್ತಿದ್ದರು. ನಂತರದ ದಿನದಲ್ಲಿ ಕೆಲವು ವಿಕೃತ ಮನಸ್ಥಿತಿಯ ಮಂದಿ ಬೆಳ್ಳಂಬೆಳ್ಳಿ ಗೆಯೇ ಅಮಲು ಪದಾರ್ಥ ನೀಡಿ ತಮ್ಮ ವಿರುದ್ಧ ರಾಜಕಾರಣಿಗಳಿಗೆ ಬೈಗುಳ ಹೇಳಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟು ಖುಷಿ ಪಟ್ಟು ಕೊಳ್ಳುತ್ತಿದ್ದರು. ಹೀಗೆ ಇವರ ಜನಪ್ರಿಯತೆ ಬೆಳೆಯುತ್ತಾ ಕೆಲವು ತುಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

ದುಶ್ಚಟಕ್ಕೆ ಬಲಿಯಾಗಿ ಮನೆ ಮಂದಿಯನ್ನು ಮರೆತು ಒಂಟಿ ಜೀವನ ಕಳೆಯುತ್ತಿದ್ದರು.
ಒಬ್ಬ ವ್ಯಕ್ತಿ ಸಮಾಜದಲ್ಲಿ ದಾರಿ ತಪ್ಪಿದಾಗ ಬುದ್ದಿ ಹೇಳುವ ಜನ ಕಡಿಮೆ. ಆತನ ದೌರ್ಬಲ್ಯವನ್ನೇ ತಮ್ಮ ಬಂಡವಾಳ ಮಾಡಿ ಕೊಳ್ಳುವ ಮಂದಿ ಅಧಿಕ.
ಒಂದು ವರ್ಷದಿಂದ ಅನಾರೋಗ್ಯಕ್ಕಿಡಾದಾಗ ಯಾರೂ ಕೈ ಹಿಡಿಯದಾದರು.
ದುಡಿಯಲು ಆಗದೇ ಮಾತು ಕೂಡ ಆಡಲು ಕಷ್ಟ ಅನಿಸಿದಾಗ, ಆಪತ್ಬಾಂಧವ ಈಶ್ವರ ಮಲ್ಪೆ ಅವರು ಚಿಕಿತ್ಸೆ ನೀಡಿ ಸಾಲಿಗ್ರಾಮದ ಹೊಸಬೆಳಕು ಆಶ್ರಮಕ್ಕೆ ಕರೆ ತಂದರು.

ಇದೀಗ ಎದ್ದೇಳಲು ಆಗದ ಸ್ಥಿಯಲ್ಲಿದ್ದರೂ ಕೂಡ ಆಶ್ರಮದವರು ಚಿಕಿತ್ಸೆ ಮತ್ತು ಉಟೋಪಚಾರ ನೀಡಿ ಆರೈಕೆ ಮಾಡುತ್ತಿದ್ದಾರೆ.

Join WhatsApp

Join Now

Join Telegram

Join Now

Read more

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

ಎಕ್ಸಲೆಂಟ್ ಕಾಲೇಜು, ಸುಣ್ಣಾರಿ, ಕುಂದಾಪುರ: “ರಾಜ್ಯದಲ್ಲಿ ಅತ್ಯುತ್ತಮ ಸಾಧನೆ”

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಡೋಣ ಬಾ ಬೇಸಿಗೆ ಶಿಬಿರಕ್ಕೆ ಚಾಲನೆ.ಕ್ರೀಡಾಸಾಧಕರಿಗೆ ಸರಕಾರಿ ಉದ್ಯೋಗ ಅವಕಾಶ – ಕ್ರೀಡಾಪಟು ಪೊಲೀಸ್ ಅಧಿಕಾರಿ ನವೀನ್ ಕಾಂಚನ್

ಬ್ರಹ್ಮಾವರ : ಸುಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿವೇತನ ಪರೀಕ್ಷೆ ಉದ್ಘಾಟನೆ : ಅಂಕಗಳಿಕೆ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಿ. ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

Leave a Comment