
ಬ್ರಹ್ಮಾವರ: ವರ್ತೆ ಪಂಜುರ್ಲಿ ಮತ್ತು ಬೈಕಾಡ್ತಿ ದೈವಗಳ ಸಿರಿ ಸಿಂಗಾರ ಕೋಲ ಸೇವೆಯು ಬುದುವಾರ ಹಲುವಳ್ಳಿಯ ಬಡಾಬೆಟ್ಟು ಮನೆಯಂಗಳದಲ್ಲಿ ಜರುಗಿತು.
ಹುಬ್ಬಳ್ಳಿಯ ಪ್ರಸಿದ್ಧ ಉದ್ಯಮಿಗಳು ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಸುಗ್ಗಿ ಸುಧಾಕರ್ ಶೆಟ್ಟಿ ಮತ್ತು ಅವರ ಕುಟುಂಬದವರು ನಂಬಿ ಆರಾಧಿಸಿಕೊಂಡು ಬಂದಿರುವ ದೈವದ ಕೋಲಾ ಸೇವೆಗೆ ಕೇಮಾರು ಮಠದ ಈಶವಿಠಲ ಸ್ವಾಮೀಜಿ ಆಗಮಿಸಿ ಅಶ್ರಿವಾದ ನೀಡಿದರು.
ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ,ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ, ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ,ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ,ಮಂಗಳೂರಿನ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಸೇರಿದಂತೆ ಸರ್ವ ಪಕ್ಷದ ರಾಜಕೀಯ ಧೂರಿಣರು ಮತ್ತು ಸುಗ್ಗಿ ಸುಧಾಕರ್ ಶೆಟ್ಟಿಯವರ ಅಭಿಮಾನಿ ವರ್ಗದವರು, ಊರಿನ ಸಮಸ್ತರು ಆಗಮಿಸಿದ್ದರು. ರಾತ್ರಿ ಅನ್ನದಾನದ ಬಳಿಕ ವರ್ತೆ ಪಂಜುರ್ಲಿ ಮತ್ತು ಬೈಕಾಡ್ತಿ ದೈವಗಳ,ಸಿರಿ ಸಿಂಗಾರ ಕೋಲಾ ಸೇವೆ ಸಂಪನ್ನ ಗೊಂಡಿತು.





