ಸಾಲಿಗ್ರಾಮ| ಮಲ್ಪೆಯ ನಿವಾಸಿ ವಾಸು ಅಲಿಯಾಸ್ ವೈರಲ್ ವಾಸು ದಶಕದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆದಂತಹ ವ್ಯಕ್ತಿ.

ಮಲ್ಪೆ ಬಂದರಿನಲ್ಲಿ ಕೂಲಿ ಕೆಲಸ ಮಾಡಿ ಕೊಂಡಿದ್ದ ವ್ಯಕ್ತಿ, ಅಮಲು ಪದಾರ್ಥ ಸೇವಿಸಿದ ತಕ್ಷಣ ಸಿನಿಮಾ ನಾಯಕರ ರೀತಿಯಲ್ಲಿ ಡೈಲಾಗ್ ಹೊಡೆಯುತ್ತಿದ್ದರು. ನಂತರದ ದಿನದಲ್ಲಿ ಕೆಲವು ವಿಕೃತ ಮನಸ್ಥಿತಿಯ ಮಂದಿ ಬೆಳ್ಳಂಬೆಳ್ಳಿ ಗೆಯೇ ಅಮಲು ಪದಾರ್ಥ ನೀಡಿ ತಮ್ಮ ವಿರುದ್ಧ ರಾಜಕಾರಣಿಗಳಿಗೆ ಬೈಗುಳ ಹೇಳಿಸಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯ ಬಿಟ್ಟು ಖುಷಿ ಪಟ್ಟು ಕೊಳ್ಳುತ್ತಿದ್ದರು. ಹೀಗೆ ಇವರ ಜನಪ್ರಿಯತೆ ಬೆಳೆಯುತ್ತಾ ಕೆಲವು ತುಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.
ದುಶ್ಚಟಕ್ಕೆ ಬಲಿಯಾಗಿ ಮನೆ ಮಂದಿಯನ್ನು ಮರೆತು ಒಂಟಿ ಜೀವನ ಕಳೆಯುತ್ತಿದ್ದರು.
ಒಬ್ಬ ವ್ಯಕ್ತಿ ಸಮಾಜದಲ್ಲಿ ದಾರಿ ತಪ್ಪಿದಾಗ ಬುದ್ದಿ ಹೇಳುವ ಜನ ಕಡಿಮೆ. ಆತನ ದೌರ್ಬಲ್ಯವನ್ನೇ ತಮ್ಮ ಬಂಡವಾಳ ಮಾಡಿ ಕೊಳ್ಳುವ ಮಂದಿ ಅಧಿಕ.
ಒಂದು ವರ್ಷದಿಂದ ಅನಾರೋಗ್ಯಕ್ಕಿಡಾದಾಗ ಯಾರೂ ಕೈ ಹಿಡಿಯದಾದರು.
ದುಡಿಯಲು ಆಗದೇ ಮಾತು ಕೂಡ ಆಡಲು ಕಷ್ಟ ಅನಿಸಿದಾಗ, ಆಪತ್ಬಾಂಧವ ಈಶ್ವರ ಮಲ್ಪೆ ಅವರು ಚಿಕಿತ್ಸೆ ನೀಡಿ ಸಾಲಿಗ್ರಾಮದ ಹೊಸಬೆಳಕು ಆಶ್ರಮಕ್ಕೆ ಕರೆ ತಂದರು.
ಇದೀಗ ಎದ್ದೇಳಲು ಆಗದ ಸ್ಥಿಯಲ್ಲಿದ್ದರೂ ಕೂಡ ಆಶ್ರಮದವರು ಚಿಕಿತ್ಸೆ ಮತ್ತು ಉಟೋಪಚಾರ ನೀಡಿ ಆರೈಕೆ ಮಾಡುತ್ತಿದ್ದಾರೆ.





