ಬ್ರಹ್ಮಾವರದಲ್ಲಿ ಖತರ್ನಾಕ್ ಕಳ್ಳನ ಬಂಧನ – ಗ್ರಾಮಸ್ಥರು ನಿರಾಳ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣೆಯ ಸರಹದ್ದಿನ ,ಬಾರ್ಕೂರು ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ಕಳ್ಳತನ ಮಾಡಿ 15 ಲಕ್ಷ ರೂ ಬೆಲೆ ಬಾಳುವ ಚಿನ್ನಭರಣವನ್ನು ಕದ್ದೋಯ್ದ ಕಥರ್ನಾಕ್ ಕಳ್ಳ ಯಾವುದೇ ಕುರುಹು ಸಿಗದಹಾಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಬ್ರಹ್ಮಾವರ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಂಬಂಧಪಟ್ಟ ಎಲ್ಲಾ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದರು ಆತನ ಸುಳಿವೇ ಸಿಗಲ್ಲಿಲ. ಖತರ್ನಾಕ್ ಕಳ್ಳನ ಮೇಲೆ ಹದ್ದಿನ ಕಣ್ಣಿಟ್ಟ ಬ್ರಹ್ಮಾವರ
ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರ ಭಯದಿಂದ ಅತಂಕದಲ್ಲಿದ್ದ ಬಾರ್ಕೂರು ಪರಿಸರದ ಗ್ರಾಮದ ಜನರು ನಿಟ್ಟಿಸಿರು ಬಿಟ್ಟಿದ್ದಾರೆ
ಅತಿ ಶೀಘ್ರದಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ವೃತ್ತ ನಿರೀಕ್ಷಕರು, ಉಪನಿರೀಕ್ಷಕರಾದ ಅಶೋಕ್ ಮಳಬಾಗಿ ಹಾಗೂ ಕ್ಕ್ರೈಂ ಸಿಬ್ಬಂದಿ ಮತ್ತು ಬೀಟ್ ಸಿಬ್ಬಂದಿಗಳಾದ ಅವಿನಾಶ್ ಹಾಗೂ ಸುರೇಶ ರವರಿಗೆ ಬಾರ್ಕೂರಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.
ಇನ್ನು ಮುಂದೆ ಬಾರ್ಕೂರು ಸುತ್ತ ಮುತ್ತಲಿನ ಪರಿಸರದಲ್ಲಿ ರಾತ್ರಿ ವೇಳೆ ಏನಾದರು ತೊಂದರೆ ಆದಲ್ಲಿ, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಬಾರ್ಕೂರು ಬೀಟ್ ಪೊಲೀಸ್
ಸುರೇಶ್ ಅಥವಾ ಅವಿನಾಶ್ ಅವರನ್ನು ಸಂಪರ್ಕಿಸ ಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಪರ್ಕ ಸಂಖ್ಯೆ:ಸುರೇಶ್:(6361071475)
ಅವಿನಾಶ್ (7829183416)





