ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅನುಭವಿ ನಾಯಕ ತಿಮ್ಮ ಪೂಜಾರಿ ನೇಮಕ

On: March 4, 2026 6:07 PM
Follow Us:

ಕೋಟ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಅನುಭವಿ ನಾಯಕ ತಿಮ್ಮ ಪೂಜಾರಿ ನೇಮಕ


​ಕೋಟ: ಕಳೆದ 13 ವರ್ಷಗಳಿಂದ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅವಿರತವಾಗಿ ಸೇವೆ ಸಲ್ಲಿಸಿದ ಶಂಕರ್ ಕುಂದರ್ ಅವರ ಉತ್ತರಾಧಿಕಾರಿಯಾಗಿ, ಸಹಕಾರಿ ಕ್ಷೇತ್ರದ ಧುರೀಣ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ತಿಮ್ಮ ಪೂಜಾರಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಹಾಲಿ ಅಧ್ಯಕ್ಷ ಶಂಕರ್ ಕುಂದರ್ ಮತ್ತು ಜಿಲ್ಲಾ ನಾಯಕರ ಆಶಯದಂತೆ ಈ ಬದಲಾವಣೆ ಮಾಡಲಾಗಿದ್ದು, ಪಕ್ಷದ ಸಂಘಟನೆಯಲ್ಲಿ ಹೊಸ ಉತ್ಸಾಹ ತುಂಬುವ ಗುರಿಯನ್ನು ಹೊಂದಲಾಗಿದೆ. ಶಂಕರ್ ಕುಂದರ್ ಅವರು ದೀರ್ಘಕಾಲದವರೆಗೆ ಪಕ್ಷವನ್ನು ಮುನ್ನಡೆಸಿ ಸಶಕ್ತವಾಗಿ ಸಂಘಟಿಸಿದ್ದರು. ಈಗ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ನಿರೀಕ್ಷೆಯೊಂದಿಗೆ ತಿಮ್ಮ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ.

​ತಿಮ್ಮ ಪೂಜಾರಿಯವರು ಕೇವಲ ರಾಜಕೀಯವಲ್ಲದೆ, ಸಹಕಾರಿ ಕ್ಷೇತ್ರದಲ್ಲೂ ಅಪಾರ ಅನುಭವ ಹೊಂದಿದ್ದಾರೆ:
​ಕೋಟ ಸಿ.ಎ. ಬ್ಯಾಂಕ್ (ವ್ಯವಸಾಯ ಸೇವಾ ಸಹಕಾರಿ ಸಂಘ) ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿತ ತಂಡದ ಆಡಳಿತದಲ್ಲಿ ಮುಂದುವರಿಯುವಲ್ಲಿ ಇವರ ಶ್ರಮ ಗಣನೀಯವಾದುದು. ಎರಡು ಅವಧಿಗೆ ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ ನಿರ್ದೇಶಕರಾಗಿ ಮುಂದುವರಿಯುತ್ತಿದ್ದಾರೆ.
​ಅಲ್ಲದೆ ಈ ಹಿಂದೆ ತಾಲೂಕು ಪಂಚಾಯತ್ ಸದಸ್ಯರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
​ ಇವರ ಪತ್ನಿಯವರು ಕೋಟ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.

​ತಿಮ್ಮ ಪೂಜಾರಿಯವರ ಈ ನೇಮಕವು ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾರ್ಯಕರ್ತರಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ವಿಶ್ವಾಸ ವ್ಯಕ್ತವಾಗಿದೆ.

Join WhatsApp

Join Now

Join Telegram

Join Now

Read more

ಕೋಟ “ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ: ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣದಲ್ಲಿ ನಾಲ್ವರಿಗೆ ನ್ಯಾಯಾಲಯದ ದಂಡ”

ಸಿದ್ದಾಪುರ: ಬಿಜೆಪಿ ನಾಯಕರ ವೈಫಲ್ಯವೇ ವರಾಹಿ ಅವ್ಯವಸ್ಥೆಗೆ ಕಾರಣ – ವಿನಯ ಕುಮಾರ್ ಸೊರಕೆ ಆಕ್ರೋಶ.

ಕುಂದಾಪುರ: ನಿನ್ನೆ ಅವಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ – ಇಂದು ತಡೆಯಾಜ್ಞೆ? ಇದು ಕಾಂಗ್ರೆಸ್ ನಡೆ.

ಯುದ್ಧದ ಕಾರ್ಮೋಡ ನಡುವೆ ಸಾಲಿಗ್ರಾಮ, ನಂಚಾರು ವಿವಿದೆಡೆ ಆಕಾಶದಲ್ಲಿ ಜೆಟ್ ಗರ್ಜನೆ: ಜನರಲ್ಲಿ ತೀವ್ರ ಆತಂಕ.! ಸರ್ವೆ ಕಾರ್ಯವೇ ಕಾರಣವೆಂಬ ಸುಳಿವು

ಸಂಪತ್ ಕುಮಾರ್ ಶೆಟ್ಟಿಯವರಿಗೆ ಪ್ರತಿಷ್ಟಿತ ವಿಜಯರತ್ನ ಪ್ರಶಸ್ತಿ – 2026: ಉದ್ಯಮ ಕ್ಷೇತ್ರ ಮತ್ತು ಸಮಾಜ ಸೇವೆಗೆ ಸಂದ ಗೌರವ

ಪೊಲೀಸ್‌ ಇಲಾಖೆಯ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಎಸ್‌ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

Leave a Comment