ಪ್ರವಾಸಿಗರ ಸಾವಿನಲ್ಲೂ ಚಿಲ್ಲರೆ ರಾಜಕೀಯ: ಪ್ರಸಾದ್ ರಾಜ್ ಕಾಂಚನ್ ವಿರುದ್ಧ ದಿನೇಶ್ ಅಮೀನ್ ವಾಗ್ದಾಳಿ

ಉಡುಪಿ :ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಡಿ ಬೆಂಗ್ರೆಯಲ್ಲಿ ಇತ್ತೀಚಿಗೆ ಪ್ರವಾಸಿ ಬೋಟ್ ದುರಂತ ಸಂಭವಿಸಿ, ಮೂವರು ಪ್ರವಾಸಿಗರು ಸಾವಿಗಿಡಾಗಿದ್ದರು. ಈ ಬಗ್ಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣರವರು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಆದರೆ ಕ್ಷೇತ್ರದ ವ್ಯಾಪ್ತಿಯ ಪರಿಮಿತಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದ ಉಡುಪಿ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಸಾದ್ ರಾಜ್ ಕಾಂಚನ್ ಉಡುಪಿ ಶಾಸಕರನ್ನು ಅವಮಾನ ಮಾಡುವ ರಾಜಕೀಯ ಉದ್ದೇಶದಿಂದ ಏನೇನೋ ಹೇಳುತ್ತಿದ್ದಾರೆ ಎಂದು ದಿನೇಶ್ ಅಮೀನ್ ಆರೋಪಿಸಿದರು.
ದೋಣಿ ದುರಂತ ಸಂಭವಿಸಿದ್ದು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಡಿ ಬೆಂಗ್ರೆ ಕಡಲ ತೀರದಲ್ಲಿ.
ಪ್ರಬುದ್ಧ ಮತದಾರನ್ನು ಹೊಂದಿರುವ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ ಜನತೆಗೆ ಮಾಡಿದ ಅಪಮಾನ.
ಪ್ರವಾಸಿಗರ ಸುರಕ್ಷತೆ ಬಗ್ಗೆ ಮಾತನಾಡದೆ ಕೇವಲ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಪರ ಮಾತನಾಡಿ, ಇಲಾಖೆಯ ಭ್ರಷ್ಟಾಚಾರಕ್ಕೆ ಸಹಕಾರ ನೀಡುವಂತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





