ಶೀರೂರು ಮಠದ ಸ್ತಬ್ದ ಚಿತ್ರ ವಿಚಾರವಾಗಿ ಗೊಂದಲ

ಶೀರೂರು ಮಠದ ಸ್ತಬ್ದ ಚಿತ್ರ ವಿಚಾರವಾಗಿ ಗೊಂದಲ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ನಡೆದ ಪರ್ಯಾಯ ಪೀಠದ ಮೆರವಣಿಗೆಯಲ್ಲಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಯ ಸ್ತಬ್ದ ಚಿತ್ರ ವಿಚಾರವಾಗಿ ಭಾರೀ ಚರ್ಚೆ ನಡೆಯಿತು. 2026-28 ನೇ ಸಾಲಿನ ಶೀರೂರು ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಶಿರೂರು ಸ್ವಾಮಿ (ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ)ಯ ಸ್ತಬ್ದ ಚಿತ್ರ ಮೊದಲಿಗೆ ಹಾಗೂ ಉಳಿದ ಅಷ್ಟ ಮಠ ಗಳ ಸ್ತಬ್ದ ಚಿತ್ರ ನಂತರದ ಸರದಿಯಲ್ಲಿ ಬರಬೇಕು ಎಂಬ ವಿಚಾರದಲ್ಲಿ ಭಾರೀ ಚರ್ಚೆ ನಡೆದು ಗೊಂದಲಕ್ಕೆ ಕಾರಣವಾಯಿತು.

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿ 2018 ರಲ್ಲಿ ನಿಧನರಾದರು. ಅವರ ಸ್ತಬ್ದ ಚಿತ್ರ ಮೊದಲಿಗೆ ಹೋದರೆ ನಾವೆಲ್ಲರೂ ಬರುವುದಿಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆ ಯಥಾ ಪ್ರಕಾರ ಸರದಿ ಸಾಲಿನಲ್ಲಿ ಸ್ತಬ್ದ ಚಿತ್ರ ದ ಮೆರವಣಿಗೆ ನಡೆದು ಕೊನೆಯದಾಗಿ ಶಿರೂರು ಮಠದ ಲಕ್ಷ್ಮೀ ವರ ತೀರ್ಥ ಸ್ವಾಮಿಯ ಟ್ಯಾಬ್ಲೋ ನಡೆದು ಬಂದಿತು.

ವಾಟ್ಸಾಪ್ ಫೋರ್ವರ್ಡ್ ಸುದ್ದಿ ವಿರುದ್ಧ ದೂರು:
9448117050 ಎಂಬ ವಾಟ್ಸಾಪ್ ಸಂಖ್ಯೆಯ ವ್ಯಕ್ತಿಯೊಬ್ಬರು ಸುಳ್ಳು ಸುದ್ದಿಯನ್ನು ಫೋರ್ವರ್ಡ್ ಮಾಡಿದ್ದಾರೆ. ಈ ಸುದ್ದಿಯಲ್ಲಿ, ಲಕ್ಷ್ಮಿವರದ ಪುತ್ತಳಿ ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸದಿರಲು ಉಳಿದ ಎಲ್ಲಾ ಮಠಾಧೀಶರು ನಿರ್ಧರಿಸಿದ್ದಾರೆ ಎಂದು ನಮೂದಿಸಲಾಗಿದೆ.
ಈ ಸುದ್ದಿಯು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವಂಥದ್ದಾಗಿದೆ. ನಾವು ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ, ಇದನ್ನು ಫೋರ್ವರ್ಡ್ ಮಾಡಿದ ವ್ಯಕ್ತಿಯ ವಿರುದ್ಧ ಮತ್ತು ಮೂಲ ಕಳುಹಿಸಿದ ವ್ಯಕ್ತಿಯ ವಿರುದ್ಧ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮಿಯ ಅಭಿಮಾನಿಗಳು ದೂರು ದಾಖಲಿಸಲು ಮುಂದಾಗಿದ್ದಾರೆ.

Join WhatsApp

Join Now

Join Telegram

Join Now

Read more

ಕುಂದಾಪುರ: ಸುಜ್ಞಾನ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ 9ನೇ ರ‍್ಯಾಂಕ್ – ಆಡಳಿತ ಮಂಡಳಿಯಿಂದ 50 ಸಾವಿರ ನಗದು ಪುರಸ್ಕಾರ

ಕುಂದಾಪುರ: ದ್ವಿತೀಯ PUC ಫಲಿತಾಂಶದಲ್ಲಿ ಸುಣ್ಣಾರಿ ಎಕ್ಸಲೆಂಟ್ ವಿದ್ಯಾರ್ಥಿಗಳ ಅಮೋಘ ಸಾಧನೆ. ಆಡಳಿತ ಮಂಡಳಿ ಮತ್ತು ಪೋಷಕರ ಸಂಭ್ರಮ.

ಎಕ್ಸಲೆಂಟ್ ಕಾಲೇಜು, ಸುಣ್ಣಾರಿ, ಕುಂದಾಪುರ: “ರಾಜ್ಯದಲ್ಲಿ ಅತ್ಯುತ್ತಮ ಸಾಧನೆ”

ಕುಂದಾಪುರ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಆಡೋಣ ಬಾ ಬೇಸಿಗೆ ಶಿಬಿರಕ್ಕೆ ಚಾಲನೆ.ಕ್ರೀಡಾಸಾಧಕರಿಗೆ ಸರಕಾರಿ ಉದ್ಯೋಗ ಅವಕಾಶ – ಕ್ರೀಡಾಪಟು ಪೊಲೀಸ್ ಅಧಿಕಾರಿ ನವೀನ್ ಕಾಂಚನ್

ಬ್ರಹ್ಮಾವರ : ಸುಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿವೇತನ ಪರೀಕ್ಷೆ ಉದ್ಘಾಟನೆ : ಅಂಕಗಳಿಕೆ ಜೊತೆಗೆ ಸಾಮಾಜಿಕ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಿ. ಮಾಜೀ ಸಂಸದ ಜಯಪ್ರಕಾಶ್ ಹೆಗ್ಡೆ

ಬ್ರಹ್ಮಾವರ: ಹೇರಾಡಿ ಹೊಸಳಾದಲ್ಲಿ ಮರಳು ಗಣಿಗಾರಿಕೆ – ಗುತ್ತಿಗೆದಾರರ ಮತ್ತು ನಾಗರೀಕ ನಡುವೆ ಜಟಾಪಟಿ, ಶಾಸಕರ ಹಾಗೂ ಸಂಸದರ ಮೌನ

Leave a Comment